ನೀವು ಒಂದು ಉದಯೋನ್ಮುಖ ಇನ್ಫೋಟೆಕ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದೀರಿ. ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಈ ಕಂಪನಿಯಲ್ಲಿ ರಮೇಶ್ ಅವರು ಮಾರ್ಕೆಟಿಂಗ್ ತಂಡದ ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ ಒಂದು ವರ್ಷದ ಅಲ್ಪಾವಧಿಯಲ್ಲಿ, ಅವರು ಕಂಪನಿಯ ಆದಾಯವನ್ನು ದುಪ್ಪಟ್ಟುಗೊಳಿಸುವಲ್ಲಿ ಮತ್ತು ಕಂಪನಿಯ ಬ್ರ್ಯಾಂಡ್ ಖ್ಯಾತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿದ್ದಾರೆ. ಅವರ ಕಾರ್ಯಕ್ಷಮತೆಯನ್ನು ಗಮನಿಸಿದ ನೀವು ಅವರಿಗೆ ಪದೋನ್ನತಿಯನ್ನು ನೀಡಲು ಬಯಸುತ್ತಿದ್ದೀರಿ. ಆದರೆ ರಮೇಶ್ ರವರು ಮಹಿಳೆಯರ ಬಗ್ಗೆ ಅಸಭ್ಯ ಹಾಸ್ಯ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ತಂಡದ ಕೆಲವು ಮಹಿಳಾ ಸದಸ್ಯರಿಗೆ ಅಸಭ್ಯ SMS ಗಳನ್ನು ಕಳುಹಿಸುತ್ತಾರೆ ಎಂದು ಕೆಲವರು ನಿಮಗೆ ದೂರು ನೀಡುತ್ತಾರೆ.
ಒಂದು ದಿನ, ರಮೇಶ್ ಅವರ ತಂಡದ ಸದಸ್ಯರಲ್ಲಿ
ಒಬ್ಬರಾದ ಶ್ರೀಮತಿ X, ತೀವ್ರ ದುಃಖಿತರಾಗಿ ನಿಮ್ಮ ಬಳಿಗೆ ಬರುತ್ತಾರೆ. ರಮೇಶ್ ಅವರು ಆಕೆಯನ್ನು ಅನುಚಿತವಾಗಿ
ಸ್ಪರ್ಶಿಸಲು ಪ್ರಯತ್ನಿಸಿದರು ಎಂದು ದೂರು ನೀಡುತ್ತಾರೆ. ಅವರು ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು
ಮಾಡುತ್ತಿರುವುದಾಗಿ ನಿಮಗೆ ತಿಳಿಸುತ್ತಾರೆ.
·
ಇಂತಹ ಸಂದರ್ಭವನ್ನು ಎದುರಿಸಲು ನಿಮಗೆ ಲಭ್ಯವಿರುವ ಆಯ್ಕೆಗಳು ಯಾವುವು?
·
ಪ್ರತಿಯೊಂದು ಆಯ್ಕೆಗಳನ್ನು ಮೌಲ್ಯಮಾಪನ ಮಾಡಿ.
·
ಮೇಲಿನ ಪರಿಸ್ಥಿತಿಯನ್ನು ಎದುರಿಸಲು ಅತ್ಯಂತ ನೈತಿಕ ಮಾರ್ಗವನ್ನು ವಿವರಿಸಿ.
ಈ ಸನ್ನಿವೇಶವನ್ನು ಸೂಕ್ತವಾಗಿ ಎದುರಿಸಲು ವಸ್ತುನಿಷ್ಠತೆಯ ಮೌಲ್ಯ ಅಗತ್ಯವಾಗಿದೆ. ವಸ್ತುನಿಷ್ಠತೆ
ಎಂದರೆ ಸತ್ಯ ಹಾಗು ವಾಸ್ತವ ಅಂಶಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಒಂದು
ಕಂಪನಿಯಲ್ಲಿ ಕಾರ್ಯ
ನಿರ್ವಹಿಸುವ ಉದ್ಯೋಗಿಗಳು ಕೇವಲ
ವೃತ್ತಿಪರ ಸಾಮರ್ಥ್ಯವನ್ನು ಹೊಂದಿರುವುದಲ್ಲದೆ ನೈತಿಕ
ಸಾಮರ್ಥ್ಯವನ್ನು ಹೊಂದಿರಬೇಕು.
ಪ್ರಕರಣಕ್ಕೆ ಸಂಬಂಧಪಟ್ಟ ಪ್ರಮುಖ ವ್ಯಕ್ತಿಗಳು/ಸಂಸ್ಥೆಗಳು
(Stakeholders):
- ಕಾರ್ಯನಿರ್ವಾಹಕ
ನಿರ್ದೇಶಕ ನಾದ ನಾನು
- ರಮೇಶ್ (ಮಾರ್ಕೆಟಿಂಗ್
ಮುಖ್ಯಸ್ಥ)
- ಶ್ರೀಮತಿ X (ದೂರುದಾರರು)
- ಇತರ ತಂಡದ ಸದಸ್ಯರು
- ಕಂಪನಿ
- ಷೇರುದಾರರು/ಹೂಡಿಕೆದಾರರು
ಲಭ್ಯವಿರುವ ಆಯ್ಕೆಗಳು
- ರಮೇಶ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಶ್ರೀಮತಿ X
ಅವರ ರಾಜೀನಾಮೆಯನ್ನು ಸ್ವೀಕರಿಸುವುದು.
- ರಮೇಶ್ ಅವರಿಗೆ ಎಚ್ಚರಿಕೆಯನ್ನು ನೀಡುವುದು
ಮತ್ತು ಶ್ರೀಮತಿ X ಅವರನ್ನು ರಮೇಶ್ ನನ್ನು ಕ್ಷಮಿಸುವಂತೆ ಕೇಳಿಕೊಳ್ಳುವುದು.
- ಶ್ರೀಮತಿ X ಅವರಿಂದ ಲಿಖಿತ ದೂರು ಪಡೆದು ದೇಶದ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದು.
ಆಯ್ಕೆಗಳನ್ನು ಮೌಲ್ಯಮಾಪನ
- ರಮೇಶ್
ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ಶ್ರೀಮತಿ X ಅವರ ರಾಜೀನಾಮೆಯನ್ನು ಸ್ವೀಕರಿಸುವುದು:
- ಅನುಕೂಲಗಳು:
- ತಕ್ಷಣದ ಸಮಸ್ಯೆ ಪರಿಹಾರವಾಗುತ್ತದೆ.
- ಕಂಪನಿಯ ಆಂತರಿಕ ವಿವಾದಗಳು
ಬಹಿರಂಗವಾಗುವುದಿಲ್ಲ.
- ಕಂಪನಿಯ ಪ್ರಮುಖ ಉದ್ಯೋಗಿಯನ್ನು
ಕಳೆದುಕೊಳ್ಳುವ ಅಪಾಯವಿರುವುದಿಲ್ಲ.
- ಅನಾನುಕೂಲಗಳು:
- ಅನ್ಯಾಯಕ್ಕೊಳಗಾದ
ಉದ್ಯೋಗಿಗೆ ನ್ಯಾಯ ಸಿಗುವುದಿಲ್ಲ.
- ಕಂಪನಿಯಲ್ಲಿ
ಇಂತಹ ವರ್ತನೆಗಳನ್ನು ಸಹಿಸಿಕೊಳ್ಳಲಾಗುತ್ತದೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ.
- ಕಂಪನಿಯ ಕೆಲಸದ ವಾತಾವರಣ
ಹದಗೆಡುತ್ತದೆ.
- ಭವಿಷ್ಯದಲ್ಲಿ
ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗುತ್ತದೆ.
- ರಮೇಶ್
ಅವರಿಗೆ ಎಚ್ಚರಿಕೆಯನ್ನು ನೀಡುವುದು ಮತ್ತು ಶ್ರೀಮತಿ X ಅವರನ್ನು ರಮೇಶ್ ನನ್ನು ಕ್ಷಮಿಸುವಂತೆ ಕೇಳಿಕೊಳ್ಳುವುದು:
- ಅನುಕೂಲಗಳು:
- ರಮೇಶ್ ಅವರಿಗೆ ತಮ್ಮ ತಪ್ಪನ್ನು ಅರಿತುಕೊಳ್ಳಲು ಮತ್ತು ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುತ್ತದೆ.
- ಕಂಪನಿಯ ಪ್ರಮುಖ ಉದ್ಯೋಗಿಯನ್ನು
ಕಳೆದುಕೊಳ್ಳುವ ಅಪಾಯವಿರುವುದಿಲ್ಲ.
- ಅನಾನುಕೂಲಗಳು:
- ಸಮಸ್ಯೆಯ
ಮೂಲವನ್ನು ಪರಿಹರಿಸುವುದಿಲ್ಲ.
- ಭವಿಷ್ಯದಲ್ಲಿ
ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗುತ್ತದೆ.
- ಶ್ರೀಮತಿ
X ಅವರ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ.
- ಶ್ರೀಮತಿ
X ಅವರಿಂದ ಲಿಖಿತ ದೂರು ಪಡೆದು ದೇಶದ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದು:
- ಅನುಕೂಲಗಳು:
- ಅನ್ಯಾಯಕ್ಕೊಳಗಾದ
ಉದ್ಯೋಗಿಗೆ ನ್ಯಾಯ ಸಿಗುತ್ತದೆ.
- ಕಂಪನಿಯಲ್ಲಿ
ಸುರಕ್ಷಿತ ಮತ್ತು ಗೌರವಯುತ ಕೆಲಸದ ವಾತಾವರಣವನ್ನು ಸೃಷ್ಟಿಸುತ್ತದೆ.
- ಭವಿಷ್ಯದಲ್ಲಿ
ಇಂತಹ ಘಟನೆಗಳು ನಡೆಯುವುದನ್ನು ತಡೆಯುತ್ತದೆ.
- ಕಂಪನಿಯು
ಕಾನೂನನ್ನು ಪಾಲಿಸುತ್ತದೆ ಎಂಬ ಸಂದೇಶವನ್ನು ರವಾನಿಸುತ್ತದೆ.
- ಅನಾನುಕೂಲಗಳು:
- ಕಂಪನಿಯ ಪ್ರಮುಖ ಉದ್ಯೋಗಿಯನ್ನು
ಕಳೆದುಕೊಳ್ಳುವ ಅಪಾಯವಿದೆ.
- ಕಂಪನಿಯ ಆಂತರಿಕ ವಿವಾದಗಳು
ಬಹಿರಂಗವಾಗಬಹುದು.
ಅತ್ಯಂತ ನೈತಿಕ ಮಾರ್ಗ:
ಶ್ರೀಮತಿ X ಅವರಿಂದ ಲಿಖಿತ ದೂರು ಪಡೆದು, 2013ರ ಲೈಂಗಿಕ ಕಿರುಕುಳ ತಡೆ ಕಾಯ್ದೆಯಲ್ಲಿ (POSH) ತಿಳಿಸಿರುವ ತತ್ವಗಳ ಆಧಾರದ ಮೇಲೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸುವುದು ಅತ್ಯಂತ ಸೂಕ್ತವಾದ ಕ್ರಮವಾಗಿದೆ. ಈ ಆಯ್ಕೆಯು ಶ್ರೀಮತಿ X ಮತ್ತು ಇತರ ಉದ್ಯೋಗಿಗಳ ಯೋಗಕ್ಷೇಮಕ್ಕೆ ಆದ್ಯತೆ ನೀಡುತ್ತದೆ, ಕಾನೂನು ನಿಯಮಗಳ ಅನುಸರಣೆಯನ್ನು ಖಾತ್ರಿಪಡಿಸುತ್ತದೆ ಮತ್ತು ಸಮಗ್ರತೆ ಮತ್ತು ನ್ಯಾಯದ ಕಂಪನಿಯ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ದೀರ್ಘಾವಧಿಯಲ್ಲಿ ಧನಾತ್ಮಕ ಕೆಲಸದ ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಮತ್ತು ಕಂಪನಿಯ ಖ್ಯಾತಿಯನ್ನು ರಕ್ಷಿಸಲು ಕಿರುಕುಳ ಮತ್ತು ಅನುಚಿತ ವರ್ತನೆಯ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವುದು ಅತ್ಯಗತ್ಯ.
No comments:
Post a Comment